Chapter 5

ಮಂತ್ರಗಳನ್ನು ಆಲಿಸಿ (ಸಮಯದ ಅವಧಿ : 10 ನಿಮಿಷಗಳು)

2 sections

ಮಂತ್ರಗಳನ್ನು ಆಲಿಸಿ (ಸಮಯದ ಅವಧಿ : 10 ನಿಮಿಷಗಳು)

ಈ ಕೊನೆಯ ಹೆಜ್ಜೆಯಲ್ಲಿ , ಸುಮ್ಮನೆ ಆನಂದದ ಮನೋಭಾವನೆಯಲ್ಲಿ ನಿಶ್ಶಬ್ದವಾಗಿ ಕುಳಿತುಕೊಂಡು ಪಠಿಸುತ್ತಿರುವ ಮಂತ್ರವನ್ನು ಆಲಿಸಿ. ವಿಶ್ವಶಕ್ತಿಯೊಂದಿಗೆ ಸಂಬಂಧ ಹೊಂದಿದ ಹಾಗೆ ಸುಮ್ಮನೆ ಅನುಭವಿಸಿ ಮತ್ತು ಶಕ್ತಿಶಾಲಿಯಾದ ಮಂತ್ರಗಳಿಂದ ನಿಮ್ಮ ಅಂತರಂಗದಲ್ಲಿ ಆಗುವ ಕಂಪಗಳನ್ನು ಅನುಭವಿಸಿ. ಮಂತ್ರಗಳು ವಿಶ್ವಶಕ್ತಿಗೆ ಅಥವಾ ಗುರುಗಳಿಗೆ ನಮ್ಮನ್ನು ಅಜ್ಞಾನದಿಂದ ಬಿಡುಗಡೆಗೊಳಿಸಿ ನಿರಂತರವಾದ ಆನಂದವನ್ನು, ಅಂದರೆ ನಿತ್ಯಾನಂದವನ್ನು ಹೊಂದಲು ಸಹಾಯ ಮಾಡುವ ಈ ಮಹತ್ತರ ಪ್ರಜ್ಞೆಯನ್ನು ನಮಗೆ ದಯಪಾಲಿಸಿದ್ದಕ್ಕಾಗಿ ನಮ್ಮ ಕೃತಜ್ಞತೆಗಳನ್ನು ಅರ್ಪಿಸುವ ಒಂದು ವಿಧಾನ.

ನೀವು ವಿಧಿ ವಿಧಾನಗಳಲ್ಲಿ ಆಸಕ್ತರಾಗಿದ್ದರೆ, ನೀವು ಗುರುಪೂಜಾವನ್ನು ( ಗುರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುವುದು) ಈ ನಡಿಗೆಯಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ವಿಧಿಗಳನ್ನು ಮಾಡಬಹುದು.

ನೀವು ವಿಧಿಗಳಲ್ಲಿ ಆಸಕ್ತರಾಗಿಲ್ಲದಿದ್ದರೆ, ಸುಮ್ಮನೆ ನಿಶ್ಶಬ್ದವಾಗಿ ಕುಳಿತು ಮಂತ್ರಗಳನ್ನು ಆಲಿಸಬಹುದು. ಕೇವಲ ಮಂತ್ರಗಳನ್ನು ಆಲಿಸುವುದರಿಂದ ಕೂಡ ನಿಮಗೆ ತುಂಬಾ ಒಳಿತನ್ನು

ಮಾಡುವುದು. ಮಂತ್ರಗಳು ಕಂಪನಗಳಿಂದ ಕೂಡಿದ್ದು ನಿಮ್ಮನ್ನು ಹೆಚ್ಚು ಪವಿತ್ರವಾಗಿಯೂ ಮತ್ತು ಆನಂದದಾಯಕವಾಗಿಯೂ ಇರಲು ನಿಮ್ಮನ್ನು ಪರಿವರ್ತಿಸುತ್ತದೆ.

ಆದುದರಿಂದ ದೈನಂದಿಕವಾಗಿ ಈ ಧ್ಯಾನತಂತ್ರವನ್ನು ದಿನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಮಾಡಿ ಮತ್ತು ನಿಮ್ಮಲ್ಲಿ ಒಂದು ಹೊಸ ಆಯಾಮವನ್ನು ಅನುಭವಿಸಲು ಪ್ರಾರಂಭಿಸಿ. ಈ ತಂತ್ರವು ನಿಮ್ಮ ಪರಿಶುದ್ದ ಅರಿವನ್ನು ಮತ್ತು ನಿತ್ಯಾನಂದದ ಸ್ಥಿತಿಯನ್ನು ಅನುಭವಿಸಲು ಮನಸ್ಸು ಮತ್ತು ದೇಹವನ್ನು ತಯಾರುಮಾಡಲು ಸಹಾಯಮಾಡುತ್ತದೆ. ನಿಮಗೆ ಅನುಭವವಾಗಲಿ ಮತ್ತು ನಿರಂತರ ಆನಂದವಾದ ನಿತ್ಯಾನಂದನಲ್ಲಿ ಒಂದಾಗಿರಿ.

The Supreme Pontiff Of Hinduism Bhagawan Sri Nithyananda Paramashivam ರನ್ನು ಕುರಿತು

ಜೀವನದ ಉದ್ದೇಶವನ್ನು ಅರಿಯುವ ಮಾನವನ ಕೊನೆಯಿಲ್ಲದ ಹುಡುಕಾಟವು ಈ ವಾಕ್ಯ ದೊಂದಿಗೆ ಕೊನೆಗೊಳ್ಳುತ್ತದೆ. ಆನಂದವು ಮಾರ್ಗ ಮಾರ್ಗ ಮತ್ತು ಗುರಿ. ಇದೇ ನಮ್ಮ ನಡುವೆ ಇರುವ ಪರಮ ಜ್ಞಾನ ಹೊಂದಿದ ಮತ್ತು ಆಧುನಿಕ ಆಧ್ಯಾತ್ಮಿಕ ಗುರುಗಳಾದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಅನುಭವ ಮತ್ತು ಬೋಧನೆ.

ಅವರ ಜೀವನ ಧ್ಯೇಯವು, ಆನಂದವೇ ಅಂತಿಮ ಗುರಿಯಲ್ಲ ಆದರೆ ಮಾರ್ಗವೇ – ಅಂದರೆ ದಿನದ 24

ಗಂಟೆಗಳೂ ಆನಂದದಲ್ಲಿ ಬದುಕುವುದು! ಎಂದು ಅನುಭವದಿಂದ ಅರಿಯುವುದನ್ನು ಮೊದಲು ನೀಡುವುದು. ನಮ್ಮದೇ ಆಂತರ್ಯದ ಮಾರ್ಗದಲ್ಲಿ ಕೆಲಸ ಮಾಡುವ ಮುಖಾಂತರ ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದು ಸಾಧ್ಯವೆಂಬ ಅರಿವನ್ನು ನಮ್ಮಲ್ಲಿ ತರುತ್ತಾರೆ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಹುಟ್ಟಿದ್ದು ತಿರುವಣ್ಣಾಮಲೈ–ದಕ್ಷಿಣ ಭಾರರದ ಆಧ್ಯಾತ್ಮಿಕತೆಯ ಶಕ್ತಿ ಕೇಂದ್ರದಲ್ಲಿ, ತೀವ್ರವಾದ ಧ್ಯಾನ, ಯೋಗದ ಅಧ್ಯಯನ, ತಂತ್ರ ಮತ್ತು ಇತರ ಪೌರಾತ್ಯ ಆಧ್ಯಾತ್ಮ ಜ್ಞಾನದ ಮುಖೇನ ಅವರು ಅಂತರಂಗದ ಪರಮಾನಂದವನ್ನು ಹೊಂದಿದರು. ಅವರದೇ ಸ್ವಂತ ಅನುಭವದಿಂದ ಪ್ರತಿಯೊಬ್ಬ ವ್ಯಕ್ತಿಯ ಜಾಗೃತಿಯನ್ನು ಸ್ಫೋಟಿಸಲು ಮತ್ತು

ಆಧ್ಯಾತ್ಮಿಕವಾಗಿ ಬಲಾಢ್ಯ ವ್ಯಕ್ತಿಗಳನ್ನು ಸೃಷ್ಟಿಸಲು ತಂತ್ರಜ್ಞಾನವೊಂದನ್ನು ರೂಪಿಸಿದರು. ರೂಪಿಸಿರುವ ಅಸಂಖ್ಯಾತ ಕಾರ್ಯಕ್ರಮಗಳು ಧ್ಯಾನವೆಂದು ಕರೆಯುವ ಸಹಜ ಜಾಗದಲ್ಲಿ ವ್ಯಕ್ತಿಯು ಬೀಳುವಂತೆ ಮಾಡುತ್ತವೆ. ಅವರು ಹೇಳುತ್ತಾರೆ, ಭೌತಿಕ ಜಗತ್ತಿನಲ್ಲಿ ಯಶಸ್ಸನ್ನು ಮತ್ತು ನಿಮ್ಮ ಅಂತರಂಗದಲ್ಲಿ ಆಳವಾದ ಸಾಫಲ್ಯತೆಯನ್ನು ತರಲು ಧ್ಯಾನವು ಅನುಪಮ ಕೀಲಿ ಕೈ.