ಅಸ್ತವ್ಯಸ್ತ ಉಸಿರಾಡುವಿಕೆ (ಸಮಯದ ಅವಧಿ : 7 ನಿಮಿಷಗಳು)
ಅಸ್ತವ್ಯಸ್ತ ಉಸಿರಾಡುವಿಕೆ (ಸಮಯದ ಅವಧಿ : 7 ನಿಮಿಷಗಳು)
ಮೊದಲ 7 ನಿಮಿಷಗಳ ಕಾಲ ನೀವು ವಜ್ರಾಸನದಲ್ಲಿ ಕುಳಿತು ಕೊಂಡು ಕಣ್ಣುಗಳನ್ನು ಮುಚ್ಚಿಕೊಂಡು ಕೈಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ಆಸವ,ಸ್ತವಾಗಿ ಉಸಿರಾಟವನ್ನು ನಡೆಸುವಿರಿ. ಉಸಿರೆಳೆದುಕೊಳ್ಳುವುದನ್ನೂ ಮತ್ತು ಬಿಡುವುದನ್ನೂ ದೀರ್ಘವಾಗಿ ಮತ್ತು ಅಸ್ಲವ್ಯಸ್ಥವಾಗಿ ನಡೆಸಿ. ಕೇವಲ ಉಸಿರಾಟದ ಮೇಲೆ ಕೇಂದ್ರೀಕರಿಸಿ. ನಿಮ್ಮ ಇಡಿಯ ಜೀವವೇ ಉಸಿರಾಟವಾಗಬೇಕು.
ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಚೈತನ್ಯವು ಸಹಸ್ರಾರ ಚಕ್ರ (ಮೂರ್ಧ್ವ ಮಧ್ಯ ಭಾಗ) ದಿಂದ ಮೂಲಾಧಾರ ಚಕ್ರ (ಮೂಲ ಮಧ್ಯಭಾಗ)ಕ್ಕೆ ಹರಿಯುವುದು. ವಜ್ರಾಸನದ ಭಂಗಿಯು ಚೈತನ್ಯದ ಊರ್ಧ್ವ ಹರಿವಿಗೆ ಸಹಾಯ ಮಾಡುವುದು.
ಉಸಿರು ಯಾರೊಬ್ಬರಿಗೆ ಆಧ್ಯಾತ್ಮಿಕ ಅಭ್ಯಾಸಕ್ಕೆ ಉತ್ತಮ ಸ್ಥಳ. ಧ್ಯಾನ ತಂತ್ರಗಳು ಹಲವಾರಿವೆ. ಹಲವರು ಕಾಣುವುದರತ್ತ ಗಮನ ಹರಿಸುತ್ತಾರೆ, ಮತ್ತೆ ಹಲವರು ಒಂದು ಪದವನ್ನು ಅಥವಾ ಒಂದು ಮಂತ್ರವನ್ನು ಪುರ್ನರುಚ್ಚರಿಸುವುದರತ್ತ ಗಮನವನ್ನು
ಕೇಂದ್ರೀಕರಿಸಿರುತ್ತಾರೆ. ಆದರೆ ನಾನು ಉಸಿರಾಡುವಿಕೆಯು ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಪ್ರಾರಂಭಿಸಲು ಅತ್ಯುತ್ತಮ ಸ್ಥಳವೆಂದು ಹೇಳಬಲ್ಲೆನು.
ನಮ್ಮ ದೇಹದಲ್ಲಿ ಎರಡು ವಿಧದ ವ್ಯವಸ್ಥೆಗಳಿವೆ. ಒಂದು ಐಚ್ಛಿಕವಾದದ್ದು ಮತ್ತೊಂದು ಅನೈಚ್ಛಿಕವಾದದ್ದು. ನಮ್ಮ ಕೈಕಾಲುಗಳನ್ನಾಡಿಸುವುದು ಐಚ್ಛಿಕ ಕಾರ್ಯದ ಉದಾಹರಣೆ. ಯಾವಾಗ ಬೇಕೋ ಆಗ ನೀವು ನಿಮ್ಮ ಕೈ ಕಾಲುಗಳನ್ನಾಡಿಸಬಹುದು. ಆದರೆ ನೀವು ನಿಮ್ಮ ಮೆದುಳಿನ ಕಾರ್ಯವನ್ನಾಗಲೀ ಅಥವಾ ಹೃದಯದ ಬಡಿತವನಾಗಲೀ ನೇರವಾಗಿ ನಿರ್ವಹಿಸಲಾರಿರಿ. ಅವೆಲ್ಲವೂ ಅನೈಚ್ಛಿಕ ಚಲನೆಗಳು. ಆದರೆ ಉಸಿರಾಡುವಿಕೆ ಯೆಂಬುದೊಂದು ಐಚ್ಚಿಕ ಹಾಗೆಯೇ ಅನೈಚ್ಛಿಕ್ಷ ಕಾರ್ಯವಿಧಾನ. ನೀವು ಪ್ರಜ್ಞಾಪೂರಕ ವಾಗಿಲ್ಲದಿದ್ದರೂ ಸಹ, ಉಸಿರಾಡುವ ಕ್ರಿಯೆಯು ತಪ್ಪುವುದೇ ಇಲ್ಲ. ನಿಮ್ಮ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಿದರೂ ಸಹ ನೀವು ಉಸಿರಾಡುವುದನ್ನು ನಿಲ್ಲಿಸುವುದಿಲ್ಲ. ಅದೊಂದು ಅನರ್ಥವಾಗಿ ಬಿಡುವುದು. ಹಾಗೆಯೇ, ನಿಮ್ಮ ಉಸಿರಾಟವನ್ನೂ ಸಹ ನಿಯಂತ್ರಿಸಬಲ್ಲಿರಿ. ಪ್ರಾಣಾಯಾಮದ ಇಡಿಯ ವಿಜ್ಞಾನವೇ ಉಸಿರಾಟದ ನಿಯಂತ್ರಣದ ಬಗ್ಗೆ ಒತ್ತು ನೀಡುತ್ತದೆ. ನೀವು ಉಸಿರಾಟವನ್ನು ಆಳವಾಗಿಯೂ ಹಾಗೂ ನಿಧಾನವಾಗಿಯೂ ಬೇಕೆಂದಾಗ ಮಾಡಬಲ್ಲಿರಿ. ನೀವು ದೀರ್ಘಕಾಲದವರೆಗೆ ಉಸಿರನ್ನು ತಡೆಹಿಡಿಯಬಲ್ಲಿರಿ ಅಥವಾ ಕೆಲವು ನಿಮಿಷಗಳ ಕಾಲ ಉಸಿರಾಟವನ್ನೇ ನಿಲ್ಲಿಸಿಬಿಡಬಲ್ಲಿರಿ. ಆದುದರಿಂದ ಉಸಿರೆಂಬುದು ನಿಮ್ಮ ಐಚ್ಛಿಕ ಮತ್ತು ಅನೈಚ್ಛಿಕ ವ್ಯವಸ್ಥೆಗಳ ನಡುವಿನ ಕೊಂಡಿಯಾಗಿದೆ.
ಆದರೆ ನೀವು ಉಸಿರಾಡುವುದನ್ನು ನಿಲ್ಲಿಸಿ ಸಾಯಲಾರಿರಿ. ಏಕೆಂದರೆ ಆಗ ಅದು ನಿಮ್ಮ ಉಳಿವಿನ ಸಹಜ ಪ್ರವೃತ್ತಿ ಮತ್ತು ನಿಮ್ಮ ಇಚ್ಛೆಯ ನಡುವಣ ಘರ್ಷಣೆಯಾಗಿರುತ್ತದೆ.
ಮತ್ತು ನಿಮ್ಮ ಉಳಿವಿನ ಸಹಜ ಪ್ರವೃತ್ತಿಯು ನಿಮ್ಮ ಇಚ್ಚಾಶಕ್ಷಿಗಿಂತಲೂ ಬಹುವಾಗಿ ಶಕವಾಗಿರುವುದು. ನೀವು ಜೀವಿಸಬೇಕೆಂಬ ಇಚ್ಛಾ ಮಾತ್ರದಿಂದಲೇ ಜೀವಿಸಿರುವಿರಿ. ನಿಮ್ಮ ಉಸಿರಾಟವು ಸಂಭವಿಸುವುದು ನೀವು ಬದುಕಬೇಕೆಂಬ ಇಚ್ಛೆಯಿಂದ ನೀವು ಗಮನಿಸಿಲ್ಲದಿರಬಹುದು. ಆದರೆ ನಿಮ್ಮ ಉಸಿರಾಟದ ಗುಣವು ನಿಮ್ಮ ಮನಸ್ಸಿನ ಸ್ಸಿತಿಗನುಗುಣವಾಗಿ ಬದಲಾವಣೆಯಾಗುತ್ತದೆ. ನಿಮ್ಮ ಭಾವನೆಗಳು ಉಸಿರಾಟದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ. ನೀವು ಉದ್ವೇಗದಲ್ಲಿರುವಾಗ ನಿಮ್ಮ ಉಸಿರಾಟವು ಬದಲಾವಣೆಯಾಗುತ್ತದೆ. ನೀವು ಕೋಪಿಸಿಕೊಂಡಿರುವಾಗ ನಿಮ್ಮ ಉಸಿರಾಟವು ಬದಲಾವಣೆಯಾಗುತ್ತದೆ. ನೀವು ಲೈಂಗಿಕವಾಗಿ ಉದ್ರೇಕಗೊಂಡಾಗ ನಿಮ್ಮ ಉಸಿರಾಟವು ಬದಲಾವಣೆಯಾಗುತ್ತದೆ. ನೀವು ಪ್ರೀತಿಸುತ್ತಿರುವಾಗ ನಿಮ್ಮ ಉಸಿರಾಟದಲ್ಲಿ ಒಂದು ಗುಣಾತ್ಮಕ ಬದಲಾವಣೆಯಿರುತ್ತದೆ. ಆದುದರಿಂದ ನಿಮ್ಮ ಉಸಿರಾಟವು ನಿಮ್ಮ ಭಾವನೆಗಳೊಂದಿಗೆ ನೇರವಾಗಿ ಸಂಬಂಧಿಸಿರುತ್ತದೆ. ನಿವ್ಮ ಮನಸ್ಸಿನ ಸ್ಥಿತಿಯ ಬದಲಾವಣೆಗಳೊಂದಿಗೆ ಅದು ಬದಲಾಯಿಸುತ್ತಲೇ ಇರುತ್ತದೆ. ನೀವು ಉದ್ದೇಗದಿಂದಿದ್ದರೆ ಆಳವಾಗಿ ಉಸಿರಾಡಬೇಕೆಂಬುದು ಸಾಮಾನ್ಯವಾಗಿ ಕೊಡುವ ಸಲಹೆ ಮತ್ತು ನೀವು ಆಳವಾಗಿ ಉಸಿರಾಡಿದ ಕ್ಷಣವೇ ಇದಕ್ಷಿದಂತೆ ಹಗುರವಾದ ಭಾವನೆಯನ್ನು ಹೊಂದುವಿರಿ, ಹೆಚ್ಚು ವಿಶ್ರಮಿಸುವಿರಿ ಹಾಗೂ ನಿಮ್ಮ ಉದ್ವೇಗವು ಬಿಡುಗಡೆಯಾಗುವುದು. ಮನಸ್ಸು ಹಾಗೂ ಉಸಿರಾಡುವುದು ಪರಸ್ಪರ ನಿಕಟ ಸಂಬಂಧ ಹೊಂದಿರುವುದು. ನೀವು ಉಸಿರಾಡುವುದನ್ನು ನಿಲ್ಲಿಸಿದರೆ ಆಲೋಚಿಸುವುದು ಕಷ್ಟವಾಗುವುದೆಂಬುದನ್ನು ನೀವು ನೋಡಬಲ್ಲಿರಿ. ಉಸಿರಾಡುವುದು ನಿಮ್ಮ ಮನಸ್ಸಿಗೆ ಇಂಧನವಾಗುವುದು. ವಾಸ್ತವವಾಗಿ
ಸಂಸ್ಕೃತದಲ್ಲಿ ಪ್ರಾಣ ಎಂಬ ಪದವನ್ನು ಉಪಯೋಗಿಸುವೆವು. ಪ್ರಾಣ ಎಂದರೆ ಉಸಿರು ಎಂದು ನೇರವಾದ ಅರ್ಥವಲ್ಲ. ಉಸಿರಿನ ಮೂಲಕ ಹರಿಯುವ ಚೈತನ್ನ ಎಂದರ್ಥ. ಆ ಚ್ಛಿತನ್ನವೇ ಜೀವಬಲವಾಗಿರುವುದು. ತೈತ್ತರೀಯ ಉಪನಿಷದ್ ನಲ್ಲಿ ಐದು ಕೋಶಗಳನ್ನು (ಪಂಚ ಕೋಶಗಳು) ಉದ್ದರಿಸಲಾಗಿದೆ. ಅನ್ನಮಯ ಕೋಶ (ಭೌತಿಕ ದೇಹದ ಕೋಶ), ಪ್ರಾಣಮಯ ಕೋಶ (ಉಸಿರಿನ ಕೋಶ), ಮನೋಮಯ ಕೋಶ (ಮನಸ್ಸಿನ ಕೋಶ), ವಿಜ್ಞಾನವುಯ ಕೋಶ (ಬುದ್ದಿಯ ಕೋಶ) ಮತ್ತು ಆನಂದವುಯ ಕೋಶ (ಪರಮಾನಂದದ ಕೋಶ) ಎಂಬುವು. ಈ ಕೋಶಗಳು ಈರುಳ್ಳಿಯ ಸಿಪೆಗಳಂತಿದ್ದು, ಕೇಂದ್ರವನ್ನು ಅಂದರೆ, ಆತ್ಮವನ್ನು ಮುಚ್ಚಿರುತ್ತವೆ. ಪ್ರಾಣಾಯಾಮ ಕೋಶ ಅಥವಾ ಉಸಿರಿನ ಕೋಶದಲ್ಲಿ ನಿಮ್ಮೆಲ್ಲ ಆಸೆಗಳ ನೆನಪುಗಳನ್ನು ಸಂಗ್ರಹವಾಗಿರುತ್ತವೆ. ಹಾಗಾಗಿ ನಿಮ್ಜ ಆಸೆಗಳಿಗನುಗುಣವಾಗಿ ನಿಮ್ಮ ಪ್ರಾಣ ಅಂದರೆ ಉಸಿರಾಟವು ಮಾರ್ಪಟ್ಟಿರುತ್ತದೆ. ನಿಮ್ಮ ಉಸಿರಾಟ ಹಾಗೂ ನಿಮ್ಚ ಆಸೆಗಳು ಬಿಗಿಯಾಗಿ ಜೋಡಣೆಯಾಗಿರುತ್ತವೆ. ನಿಮಗೆ ಅತಿಯಾದ ಆಸೆಗಳಿದ್ದರೆ ನಿಮ್ಮ ಉಸಿರಾಟವು ಅತಿ ವೇಗವಾಗಿ ಮತ್ತು ಭಾರವಾಗಿ ಇರುವುದನ್ನು ನೀವು ನೋಡಿರಬಹುದು.ಅತ್ಯಲ್ಪವಾಗಿದ್ದರೆ ನಿಮ್ಮ ಉಸಿರಾಟವು ಹೆಚ್ಚು ಆರಾಮವಾಗಿ ಇರುವುದು.
ಉಸಿರಾಟ ಮತ್ತು ಮನಸ್ ಒಂದಕ್ಕೊಂದು ಸಂಬಂಧಿತವಾಗಿರುವುದರಿಂದ ಒಂದನ್ನು ಬದಲಾಯಿಸಿದರೆ ಆದು ಮತ್ತೊಂದನ್ನು ತನ್ನಷ್ಟಕ್ಕೆ ಬದಲಾಯಿಸುತ್ತದೆ. ನಾವು ಈಗಾಗಲೇ ಹೇಗೆ ನಮ್ಮ ಭಾವನೆಗಳು ನಮ್ಜ ಉಸಿರಾಟದ ಮಾದರಿಗಳ ಮೇಲೆ ಪರಿಣಾಮ ಬೀರುವುವು ಎಂದು ಚರ್ಚಿಸಿದ್ದೇವೆ. ಅದೇರೀತಿ, ನಾವು ನಮ್ಮ ಉಸಿರಾಟವನ್ನು ನಿರ್ಬಂಧಿಸುವುದಾದರೆ ಅಥವಾ ನಮ್ಮ ಉಸಿರಾಟದ ಮಾದರಿಯಲ್ಲಿ ಹಲವು ಬದಲಾವಣೆಯನ್ನು ತರುವುದಾದರೆ ಅದು ನಮ್ಮ ಭಾವನೆಗಳ ಅಂದರೆ ನಮ್ಮ ಮನಸ್ಸಿನ ಸಿತಿಯ ಮೇಲೆ ನೇರ ಪರಿಣಾಮವನ್ನು ಬೀರುವುದು.
ನಾನು ದೇಹದ ಯಾವ ಭಾಗವನ್ನಾದರೂ ಕತ್ತರಿಸಿದರೆ ದೇಹದ ಆ ಭಾಗಕ್ಕೆ ಸಂಬಧಿಸಲ್ಪಟ್ಟ ನೆನಪು ಅಂತಿಮವಾಗಿ ಕಳೆದು ಹೋಗುವುದೆಂದು ನಾನು ಬಲವಾಗಿ ನಂಬಿದ್ದೇನೆ. ನೀವು ಇದೊಂದು ಚಿಕ್ಕ ಪ್ರಯೋಗವನ್ನು ಮಾಡಬಹುದು. ನಿಮ್ಜ ಜೀವನದಲ್ಲಿ ಸಂಭವಿಸಿದ್ದ ಹಿಂದಿನ ಯಾವುದೋ ಒಂದು ಘಟನೆಯನ್ನು ನಿಮ್ಮ ಅಂದಿನ ರೂಪವನ್ನು ಜ್ಞಾಪಕಮಾಡಿಕೊಳ್ಳದೆ ಜ್ಞಾಪಿಸಿಕೊಳ್ಳಲು ಪ್ರಯತ್ತಿಸಿ. ಇದು ಅಸಾಧ್ಯ. ಯಾವುದೇ ಘಟನೆ ಜ್ಞಾಪಿಸಿಕೊಳ್ಳಲು ನಿಮ್ಮ ರೂಪದ ಅವಶ್ಯಕತೆ ಇರುವುದು ಏಕೆಂದರೆ ನಿಮ್ಮ ಎಲ್ಲ ನೆನಪುಗಳು ನಿಮ್ಮ ರೂಪದಲ್ಲಿ ಸಂಗ್ರಹವಾಗಿರುತ್ತವೆ.
ನಿಮ್ಮ ಅನೇಕ ಮನೋಭಾವನೆಗಳನ್ನು ನಿಮ್ಮ ಅಸ್ತಿತ್ವದಲ್ಲಿ ( ಇರುವಿನಲ್ಲಿ) ಆದುಮಿಟಿರುವಿರಿ ಮತ್ತು ಆ ಕಾರಣ ನೀವು ಸಹಜವಾಗಿ ಉಸಿರಾಡಲಾರಿರಿ. ನಿಮ್ಮ ಉಸಿರಾಟವು ಆಳವಿಲ್ಲದೇ ಇರುವುದು ಮತ್ತು ನಿಮ್ಜ ಸ್ವಾಯುಗಳಲ್ಲಿ ಸಂಗ್ರಹವಾಗಿರುವ ಅದುಮಿಡಲ್ಪಟ್ಟ ಮನೋಭಾವನೆಗಳನ್ನು ನೀವು ಬಿಡುಗಡೆ ಮಾಡಲಾಗುವುದೇ ಇಲ್ಲ. ಉಸಿರಾಟವು ದೇಹದ ಪ್ರತಿಯೊಂದು ಭಾಗವನ್ನೂ ಮುಟ್ಟಲಾಗುವುದೇ ಇಲ್ಲ,
ನೀವು ಯಾವಾಗಲೂ ಒಂದು ನಿರ್ದಿಷ್ಟವಾದ ಮಾದರಿಯಲ್ಲಿಯೇ ಉಸಿರಾಡುವಿರಿ. ನಮ್ಮ ಹಿಂದಿನ ಸಂಸ್ಕಾರಗಳು, ನಮ್ಮ ಅಸ್ತಿತ್ವದಲ್ಲಿ ಆದುಮಿಡಲ್ಪಟ್ಟಿರುವ
ನಮ್ಮ ಹಿಂದಿನ ನೆನಪುಗಳು ನಮ್ಮ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟವಾದ ಉಸಿರಾಟದ ಮಾದರಿಯನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವಾಗಿ ನಾವು ಇದೇ ರೀತಿಯ ಮನೋಭಾವನೆಗಳನ್ನು ಹಾಗೂ ಸಂಸ್ಕಾರಗಳನ್ನು ಆಕರ್ಷಿಸುತ್ತೇವೆ. ನವ್ಮ ವ್ಯವಸ್ಥೆಯಲ್ಲಿರುವ ಯಾವುದೇ ಆದರೂ ಉಳಿವಿನ ಸಹಜ ಪ್ರವೃತ್ತಿಯನ್ನು ಹೊಂದಿರುತ್ತದೆ. ಆದುದರಿಂದ ನಮ್ಮ ವ್ಯವಸ್ದೆಯ ಒಳಗಡೆ ನೆಲೆಸಿ ಬೆಳೆಯಲು ಅನುಕೂಲಕರ ಸನ್ನಿವೇಶಗಳನ್ನು ಹುಟ್ಟಿಹಾಕುತ್ತದೆ. ನಿಮ್ಮ ವ್ಯವಸ್ಥೆಯಲ್ಲಿ ಕೋಪವು ಅದುಮಿಡಲ್ಪಟ್ಟಿದ್ದರೆ, ಆದು ಮೇಲಕ್ಕೆ ಬರುತ್ತಿದ್ದು ಅದರ ಉಳಿವಿಗಾಗಿ ಒಂದು ಉಸಿರಾಟದ ಮಾದರಿಯನ್ನು ಸೃಷ್ಟಿಸುತ್ತಿರುತ್ತದೆ. ಇದೊಂದು ವಿಷವರ್ತುಲ. ನಿಮ್ಮ ಉಸಿರಾಟವು ಹಿಂದಿನ ಸಂಸ್ಕಾರಗಳ ಒಟ್ಟು ಪರಿಣಾಮವಲ್ಲದೇ ಬೇರೇನಲ್ಲ.
ನೀವು ಎಷ್ಟು ಆಳವಾಗಿ ಸಾಧ್ಯವೋ ಅಷ್ಟು ಮತ್ತು ಎಷ್ಟು ಸಾಧ್ಯವೋ ಅಷ್ಟು ಅಸ್ತವ್ಯಸ್ತವಾಗಿ ಉಸಿರಾಡಬೇಕು. ನಿಮ್ಮ ಇಡಿಯ ಅಸ್ತಿತ್ವವೇ ಉಸಿರಾಟವಾಗಿಬಿಡಬೇಕು. ನಿಮ್ಮ ಉಸಿರಾಟವು ಆಳವಾಗಿರಲೇಬೇಕೆಂದು ತಿಳಿದಿರಿ. ಅಸ್ಸವ್ಯಸ್ಥ ಉಸಿರಾಟವು ಮೇಲು ಮೇಲಿನದಾಗಿರಲೇಬಾರದು. ಆಳವಾದ ಅಸ್ತವ್ಯಸ್ತ ಉಸಿರಾಟವು ನಿಮ್ಮ ಸ್ನಾಯುಗಳಿಂದ ಮತ್ತು ದೇಹದ ಭಾಗಗಳಿಂದ ಉದ್ವೇಗವನ್ನು ಮತ್ತು ಆ ಮೂಲಕ ಕೊರೆದಿಡಲಾದ ನೆನಪುಗಳನ್ನು ಬಿಡುಗಡೆ ಮಾಡಲಾರಂಭಿಸುತ್ತದೆ. ಸಾಮಾನ್ಯವಾಗಿ ನಮ್ಮ ಸ್ನಾಯುಗಳು ಸದಾ ಕಾಲವೂ ಒತ್ತಡದಲ್ಲಿರುತ್ತವೆ. ಅಸ್ತವ್ಯಸ್ತ ಉಸಿರಾಟವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಸಂಸ್ಕಾರಗಳಿಂದ ಮುಕ್ತಿಗೊಳಿಸಲಾರಂಭಿಸುತ್ತದೆ.
ಪ್ರತಿಯೊಂದು ಮನೋಭಾವನೆಯೂ ಒಂದು ನಿರ್ದಿಷ್ಠವಾದ ಉಸಿರಾಟದ ಮಾದರಿಯನ್ನುಂಟುಮಾಡುತ್ತದೆ. ಮಕ್ಕಳು ಆಳವಾಗಿಯೂ ಮತ್ತು ಆನಂದದಾಯಕ ವಾಗಿಯೂ ಉಸಿರಾಡುವುದನ್ನು ನೀವು ನೋಡಿರಬಹುದು. ಅವರು ಮೇಲೆ ಮೇಲೆ ಉಸಿರಾಡುವುದಿಲ್ಲ. ಅವರು ಬೆಳೆಯುತ್ತಿದ್ದ ಹಾಗೆ ಸಮಾಜ, ನೋವು, ನಲಿವು, ತಪಿತಸ ಮನೋಭಾವಗಳು, ನಂಬಿಕೆಗಳು, ಒತ್ತಡ ಮತ್ತು ಇತರ ಮನೋಭಾವ ಇವುಗಳಿಂದ ನಿಬಂಧನೆಗೊಳಪಡುತ್ತಾರೆ ಮತ್ತು ಅವರ ಉಸಿರಾಟದ ಗುಣವು ಸಂಪೂರ್ಣವಾಗಿ ಬದಲಾಯಿಸುತ್ತದೆ. ಈಗನೀವು ನಿಮ್ಮ ವ್ಯವಸ್ಥೆಯಲ್ಲಿ ಅನೇಕ ವರ್ಷಗಳಿಂದ ಅದುಮಿಡಲ್ಪಟ್ಟ ವುನೋಭಾವಗಳಿಂದ ಹುಟ್ಟಿದ ಯಾವುದೋ ಒಂದು ವಾದರಿಯನ್ನು ಅಲುಗಾಡಿಸಬೇಕಾದರೆ ನೀವು ಅಸ್ತವ್ಯಸ್ತ ಉಸಿರಾಟವನ್ನು ಒಳಸೇರಿಸಬೇಕು. ನೀವು ಒಂದು ತುಮುಲವನ್ನು ಹುಟುಹಾಕಬೇಕು. ಕೇವಲ ಬೇರೊಂದು ನಮೂನೆಯನ್ನು ಒಳ ಸೇರಿಸುವುದು ಪರಿಹಾರವಲ್ಲ. ನಿಮ್ಮ ವ್ಯವಸ್ಥೆಯಿಂದ ಹಿಂದಿನ ಎಲ್ಲಾ ಗುರುತುಗಳನ್ನು ಅಗೆದು ಹಾಕಬೇಕಾದರೆ ನೀವು ಸಂಪೂರ್ಣ ಅಸ್ಥವ್ಯಸತೆಯನ್ನು ಹುಟ್ಟು ಹಾಕಬೇಕು. ಆದುದರಿಂದ ಈ ಧ್ಯಾನದಲ್ಲಿ ಪ್ರಾಣಾಯಾಮದಂತಹ ಲಯಬದ್ಧವಾದ ಉಸಿರಾಟದ ಮಾದರಿಯನ್ನು ನಾನು ಶಿಫಾರಸು ಮಾಡುತ್ತಿಲ್ಲ. ಕೇವಲ ಅಸ್ಮವ್ಯಸ್ಥೆ ಉಸಿರಾಟವನ್ನಷ್ಟೇ ನಾನು ಶಿಫಾರಸ್ಸು ಮಾಡುವುದು. ಈ ಅಸ್ತವ್ಯಸ್ತ ಉಸಿರಾಟವು ನಿಮ್ಮ ಎಲ್ಲ ಹಿಂದಿನ ಸಂಸ್ಕಾರಗಳನ್ನು ನಾಶಮಾಡುತ್ತದೆ. ಇದೊಂದು ಸತ್ತ ಎಲೆಗಳುಳ್ಳ ಮರವನ್ನು ಅಲುಗಾಡಿಸಿದಂತೆ. ಸತ್ತ ಎಲೆಗಳೆಲ್ಲ ಕೆಳಗೆ ಉದುರುವುವು. ಹಾಗೆಯೇ ಅಸ್ತವ್ಯಸ್ತ ಉಸಿರಾಟವು ನಿಮ್ಹ ಅದುಮಿಡಲಟ್ಟ ವ್ಯವಸ್ಥೆಯನ್ನು ಅಲುಗಾಡಿಸಿದ ಹಾಗೆ. ಹಿಂದಿನ ಹುದುಗಿರುವ ನೆನಪುಗಳೆಲ್ಲವೂ
ಬಿಡುಗಡೆಯಾಗುವುವು. ಆಳವಾದ ಅಸ್ತವ್ಯಸ್ತ ಉಸಿರಾಟವು ದೇಹಕ್ಕೆ ಅಗಾಧವಾದ ಆಮ್ಲಜನಕವನ್ನು ತುಂಬಿಸುತ್ತದೆ ಹಾಗೂ ಅದರಿಂದ ಇಂಗಾಲದ ಡೈ ಆಕ್ಸೈಡನ್ನು ಹೊರಬಿಡುವಂತೆ ಮಾಡುತ್ತದೆ. ಅದು ತೀವ್ರವಾದ ಮುಕ್ತವಾಯು ಸಂಚಾರವನ್ನು ಸೃಷ್ಟಿಸುವುದರಿಂದ ನೀವು ಹೆಚ್ಚು ಲವಲವಿಕೆಯನ್ನೂ ಹಾಗೂ ತಾಜಾತನವನ್ನೂ ಆನುಭವಿಸುವಿರಿ. ರಕ್ತಕ್ಕೆ ಹೆಚ್ಚಿನ ಆಮ್ಲಜನಕದ ಲಭ್ಯತೆಯಿಂದ ನಿಮ್ಮ ದೇಹದ ಅಂಗಾಂಗಗಳೆಲ್ಲವೂ ತಮ್ಮಷ್ಟಕ್ಕೆ ಸಜೀವಗೊಳ್ಳುವುವು ಮತ್ತು ಆದರಿಂದ ದೇಹದ ಕೋಶಗಳಲ್ಲಿ ಹೆಚ್ಚಿನ ಜೈವಿಕ ಶಕ್ತಿಯನ್ನು ಸೃಷ್ಟಿಸುವುದು.
ಸಾಮಾನ್ಯವಾಗಿ ಯಾವಾಗಲೂ ನಾವೊಂದು ಭಾರವಾದ ಜಡವಸ್ತುವಿನಂತೆ ಭಾಸವಾಗುತ್ತದೆ. ಅದು ಏಕೆಂದರೆ ನಮ್ಮ ದೇಹವು ಯಾವತ್ತೂ ಸಜೀವವಾಗಿ ಇರಲೇ ಇಲ್ಲ. ಅದು ಸದಾಕಾಲವೂ ಒತ್ತಡ ಮತ್ತು ಉದ್ವೇಗದಲ್ಲಿಯೇ ಇರುತ್ತದೆ. ಯಾವುದೇ ವಸ್ತುವು ಉದ್ವೇಗದಲ್ಲಿ ಸಜೀವವಾಗಿರಲು ಸಾಧ್ಯವೇ ಇಲ್ಲ. ಹೆಚ್ಚಿದ ಆಮ್ಲಜನಕದ ಹರಿವಿನಿಂದ ದೇಹವು ಸಜೀವಗೊಂಡರೆ, ನೀವು ಹಗುರವಾದಂತೆ ಭಾವಿಸಲಾರಂಭಿಸುತ್ತೀರಿ. ನೀವು ಭೌತ ದ್ರವ್ಯ (matter)ದ ಬದಲು ಶಕ್ತಿಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಹುದುಗಿದ ನೆನಪುಗಳಿಂದಲೇ ನೀವು ಭಾರವಾದಂತೆ ಭಾಸವಾಗುವುದು.
ಅಂದ ಹಾಗೆ ಕೆಲವು ಬೌದರ ವಿಹಾರಗಳಲ್ಲಿ ವ್ಯಕ್ತಿಗಳಿಗೆ ಸಂನ್ಯಾಸ ದೀಕ್ಷೆಯನ್ನು ಕೊ ಡಲು ಇದನ್ನು ಒಂದು ತಂತ್ರವಾಗಿ ಉಪಯೋಗಿಸುತ್ತಾರೆ. ಆಧ್ಯಾತ್ಮಿಕ ಶಿಕ್ಷಣಗಳೆಲ್ಲವೂ ಮುಗಿದ ಮೇಲೆ ನಿಮ್ಮನ್ನು ಹುಲ್ಲಿನ ಮೇಲೆ ನಡೆಸಲಾಗುವುದು. ನೀವೊಂದು ಕಾಲುದಾರಿ ಮಾಡಿದರೆ (ನಮ್ಮ ಪಾದಗಳ ಕೆಳಗಿನ ಹುಲ್ಲು ಸತ್ತರೆ), ನಿಮಗೆ ಸಂನ್ಯಾಸ ದೀಕ್ಷೆಯನ್ನು
ನೀಡಲಾಗುವುದಿಲ್ಲ ಮತ್ತು ಹೆಚ್ಚಿನ ಆಧ್ಯಾತ್ಮಿಕ ಶಿಕ್ಷಣವನ್ನು ಸೂಚಿಸಲಾಗುವುದು. ಕಡಿಮೆ ಸಂಸ್ಕಾರವನ್ನು ಹೊಂದಿರುವ ವ್ಯಕ್ತಿಯು ನಡೆಯುವಾಗ ಹುಲ್ಲಿನ ಮೇಲೆ ದಾರಿಯನು ಮಾಡಲಾರನು, ಏಕೆಂದರೆ ಅವನ ವ್ಯವಸ್ದೆಯೊಳಗೆ ಅವನು ಸದಾ ಕಾಲವೂ ಹಗುರ ಭಾವವನ್ನು ಹೊಂದಿರುವನು. ಹುದುಗಿರುವ ನೆನಪುಗಳ ಹೊರೆಯು ಕಡಿಮೆಯಾಗಿರುವುದು.
ಅಸ್ತವ್ಯಸ್ಥ ಉಸಿರಾಟದಿಂದ ದೊರಕುವ ಹೆಚ್ಚಿನ ಆಮ್ಲಜನಕ ಮತ್ತು ಕಡಿಮೆಗೊಂಡ ಇಂಗಾಲದ ಡೈ ಆಕ್ಟೈಡ್ನಿಂದ ನೀವು ನಿಮ್ಮ ಅದುಮಿಡಲ್ಪಟ್ಟ ವ್ಯವಸ್ಥೆಯನ್ನು ಸಜೀವಗೊಳಿಸುವಿರಿ. ನಿಮ್ಜ ಉಸಿರಾಟವು ಎಷ್ಬೊಂದು ಆಳವಾಗಿ, ತೀವ್ರವಾಗಿ ಮತ್ತು ಆಸವ,ಸವಾಗಿರಬೇಕೆಂದರೆ ನೀವೇ ಇಡಿಯಾಗಿ ಉಸಿರಾಟವಾಗಿಬಿಡಬೇಕು. ಉತನವಾಗುವ ಜೈವಿಕ ಶಕ್ಕಿಯು ನಿಮ್ಮ ಸ್ವಾಯುಗಳನ್ನು ಕರಗಿಸಿ ನಿಮ್ನ ಸಂಸ್ಕಾರಗಳಿಂದ ಮುಕ್ತಿಗೊಳಿಸಲು ಆರಂಭಿಸುವುದು. ನಿವ್ಮುಲ್ಲಿ ಹಗುರು ಭಾವನೆಯನ್ನು ಉಂಟುವವಾಡಿ ನೀವು ಚೈತನ್ನದಿಂದಲೂ ಆನಂದದಿಂದಲೂ ಇರುವಂತೆ ಮಾಡುವುದು. ಈ ರೀತಿ ನಾವು ಎರಡನೆಯ ಹೆಜ್ಜೆಗೆ ಕ್ರಮಿಸುವೆವು.
ನೀವು ಅಸ್ತವ್ಯಸ ಉಸಿರಾಟದ ತಂತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚು ತಿಳಿಯಬೇಕಾದರೆ, ನೀವು ಲೈಫ್ ಬ್ಲಿಸ್ ಪ್ರೋಗ್ರಾಂ ಅಥವಾ ಆನಂದ ಸ್ಪುರಣ ಪ್ರೋಗ್ರಾಂನಲ್ಲಿ ಹೇಳಿಕೊಡಲಾಗುವ ದುಃಖ ಹರಣ ಧ್ಯಾನ ತಂತ್ರವನ್ನು ಕೂಡ ಅಭ್ಯಾಸಮಾಡಬಹುದು.