ಭಾಗ 2: ಲಿವಿಂಗ್ ಎನ್ಲೈಟನ್ಮೆಂಟ್ - ಒಂದು ಪರಿಚಯ
ಭಾಗ 2: ಲಿವಿಂಗ್ ಎನ್ಲೈಟನ್ಮೆಂಟ್ - ಒಂದು ಪರಿಚಯ
ನೀವು ಬುದ್ದಿವಂತರಾಗಿರುವುದಿಲ್ಲ. ನೀವು ಇನ್ನೊಬ್ಬರನ್ನು ಸತತವಾಗಿ ನಿಂದಿಸುತ್ತಿದ್ದಾಗ, ಒಳಗೂ ಆ ಮನಸ್ಸಿನೊಡನೆಯೇ ಜೀವಿಸಿ ವಿಧಿಸುವ ಸಾಮರ್ಥ್ಯ ಇರುತ್ತದೆ. ನೀವು ಪ್ರಜ್ಞಾರಹಿತವಾಗಿ ನಿಮ್ಮನ್ನೇ ನಿಂದಿಸಿಕೊಳ್ಳುತ್ತಿರುತ್ತೀರಿ. ನೀವು ನಿಮ್ಮನ್ನೇ ಸತತವಾಗಿ ಟೀಕಿಸಿಕೊಳ್ಳುತ್ತಿರುತ್ತೀರಿ. ಇತರರನ್ನು ಯಾರು ಸದಾ ಟೀಕಿಸುತ್ತಿರುತ್ತಾರೋ, ಅವರು ತಮ್ಮನ್ನೂ ಸತತವಾಗಿ ಹಿಂಸೆಪಡಿಸಿಕೊಳ್ಳುತ್ತಿರುತ್ತಾರೆ. ಇದೊಂದು ಮೂಲಭೂತ ಧರ್ಮ. ನೀವು ಹೇಳಬಹುದು, 'ಇಲ್ಲ ಸ್ವಾಮೀಜಿ, ನಾನು ಬೇರೆಯವರನ್ನು ಮಾತ್ರ ಟೀಕಿಸುತ್ತೇನೆ, ನನ್ನನ್ನಲ್ಲ. ನನ್ನ ವಿಷಯವಾಗಿ ಹಾಗೇ ಕೂಡ ಇದ್ದೇನೆ ಮತ್ತು ಹಾಗೆ ಇರುತ್ತೇನೆ. ನಾನು ಅದೇ ತಪ್ಪನ್ನು ಮಾಡಿದರೆ, ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುತ್ತೇನೆ' ಎಂದು.
ನಿಮ್ಮನ್ನು ಹಾಗೂ ಇತರರನ್ನು ಅಳೆಯಲು ಒಂದೇ ಮಾಪನ ತಿಳಿಯಿರಿ, ಒಂದು ಮನಸ್ಸಿನಿಂದ ಬೇರೆಯವರನ್ನು ಅಳೆದು, ಇನ್ನೊಂದು ಮನಸ್ಸಿನಿಂದ ನಿಮ್ಮನ್ನು ನೀವೇ ಅಳೆಯುವ ಎರಡು ಮನಸ್ಸುಗಳನ್ನು ಹೊಂದಿರುವಷ್ಟು ಪ್ರಜ್ಞಾವಂತಿಕೆ ನಿಮಗಿರುವುದಿಲ್ಲ. ಬೇರೆಯವರನ್ನು ಹೇಗೆ ತೂಗಿ ನೋಡುವಿರೋ, ನಿಮ್ಮನ್ನೂ ಹಾಗೆಯೇ ತೂಗಿನೋಡುವಿರಿ. ಬೇರೆಯವರ ಮೇಲೆ ತೀರ್ಪು ನೀಡುವ ಹಾಗೆಯೇ ನಿಮ್ಮ ಮೇಲೂ ತೀರ್ಪು ನೀಡುತ್ತೀರಿ.
ನಾವು ಯೋಚಿಸಬಹುದು, 'ಇಲ್ಲ ! ಬೇರೆಯವರು ಒಂದು ತಪ್ಪನ್ನು ಮಾಡಿದರೆ, ನಾನು ಟೀಕಿಸುತ್ತೇನೆ. ಆದರೆ, ನಾನೇ ಆ ತಪ್ಪನ್ನು ಮಾಡಿದಾಗ, ನನ್ನನ್ನು ನಾನು ಟೀಕಿಸಿಕೊಳ್ಳುವುದಿಲ್ಲ' ಎಂದು. ಸುಮ್ಮನೆ ನಿಮ್ಮ ಜೀವನವನ್ನೇ ನೋಡಿರಿ. ನೀವು ಇತರರ ಹುಳುಕನ್ನು ಹುಡುಕುತ್ತಿದ್ದರೆ, ನಿಮಗೆ ಬೇಕೋ ಬೇಡವೋ, ನೀವೂ ಅದೇ ಮನೋವ್ಯವಸ್ಥೆಯನ್ನು ಹೊಂದುತ್ತೀರಿ. ನೀವು ಸತತವಾಗಿ ನಿಮ್ಮನ್ನೇ ತೂಗಿನೋಡುತ್ತಾ ತಪ್ಪಿತಸ್ಥ ಭಾವನೆ ಹಾಗೂ ಕೀಳರಿಮೆಯಿಂದ ಹಿಂಸೆ ಪಡುತ್ತಿರುತ್ತೀರಿ.
ಯಾವನೊಬ್ಬನು ತನ್ನನ್ನೇ ಒಪ್ಪಿಕೊಳ್ಳುತ್ತಾನೋ ಆತನು ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುತ್ತಾನೆ. ಯಾವನೊಬ್ಬನು ತನ್ನನ್ನೇ ವಿಮರ್ಶಿಸಿ, ದೂಷಿಸಿಕೊಳ್ಳುತ್ತಾನೋ, ಆತನು ಎಲ್ಲರನ್ನೂ ಸತತವಾಗಿ ವಿಮರ್ಶಿಸಿ ದೂಷಿಸುತ್ತಾನೆ.
ಆದ್ದರಿಂದ, ಜನರು ಯಾವಾಗಲಾದರೂ, ಸ್ವಾಮೀಜಿ, ಇವರು ನಿಮ್ಮನ್ನು ಟೀಕಿಸಿದ್ದಾರೆ. ಇವರು ನಿಮ್ಮನ್ನು ಅಗೌರವಿಸಿದ್ದಾರೆ. ಅವರಿಗೆ ಶಿಕ್ಷೆ ನೀಡಿರಿ…… ಏನಾದರೂ ಹೇಳಿರಿ ಸ್ವಾಮೀಜಿ' ಎಂಬಂತಹ ಸುದ್ದಿಯನ್ನು ತಂದಾಗ, ನಾನು ಅವರಿಗೆ, 'ವಿಶ್ರಮಿಸಿರಿ ! ಆತನನ್ನು ಶಿಕ್ಷಿಸುವ ಅಗತ್ಯವಿಲ್ಲ. ಆತನು ಈಗಾಗಲೇ ಆ ಪ್ರಜ್ಞಾಸ್ಥಿತಿಯಲ್ಲಿ ಇದ್ದಾನೆ. ಆತನು ವೇದನೆಯನ್ನು ಅನುಭವಿಸುತ್ತಿದ್ದಾನೆ. ಆತನಿಗೆ ಸಾಕಷ್ಟು ಶಿಕ್ಷೆಯಾಗಿದೆ' ಎನ್ನುತ್ತೇನೆ.
ನೀವು ನಕಾರಾತ್ಮಕವಾದುದನ್ನು ಮಾಡಿ, ನರಕಕ್ಕೆ ಹೋಗಬೇಕಾಗಿಲ್ಲ. ನೀವು ನಕಾರಾತ್ಮಕವಾದುದನ್ನು ಮಾತನಾಡುವುದೇ ನೀವು ನರಕದಲ್ಲಿರುವುದರಿಂದ ಎಂದು ತಿಳಿದುಕೊಳ್ಳಿರಿ !
ಸತತವಾಗಿ ಟೀಕಿಸುವವರಿಗೆ ಒಂದು ದೊಡ್ಡ ಸಮಸ್ಯೆ ಇರುತ್ತದೆ. ಅವರು ಸೃಜನಾತ್ಮಕರಾಗಿರುವುದಿಲ್ಲ. ನಾನು ಇಂತಹ ಅನೇಕರನ್ನು ನೋಡಿದ್ದೇನೆ. ಅವರು ಎಷ್ಟು ಸೋಮಾರಿಗಳಾಗಿರುತ್ತಾರೆಂದರೆ, ಟೀಕಿಸುವುದನ್ನು ಬಿಟ್ಟು ಅವರು ಬೇರೇನನ್ನೂ ಮಾಡುವುದಿಲ್ಲ. ಅವರು ಕಲಿಯುಗದಲ್ಲಿರುತ್ತಾರೆ. ಇರಲು ಅತ್ಯಂತ ಕೆಟ್ಟ ಸ್ಥಿತಿಯೇ ಅದು.
ಧರ್ಮವು ಇನ್ನೂ ಜೀವಂತವಾಗಿದೆಯೆಂದು, ವಿಶ್ವವು ಧರ್ಮದ ಪ್ರಕಾರ ನಡೆಯುತ್ತದೆಂದು ತಿಳಿದರೆ, ನೀವು ಸತ್ಯಯುಗದಲ್ಲಿದ್ದೀರಿ ಎಂದರ್ಥ. ಕಾಲ ಕಳೆದಿದೆ ಎಂಬುದಾಗಿ, ವಿಶ್ವವು ತನ್ನ ರೀತಿಯನ್ನು ಬದಲಾಯಿಸಿ ಕೊಂಡಿಲ್ಲ. ಇಲ್ಲ ! ಅರ್ಥಮಾಡಿಕೊಂಡರೆ, ಇದ್ದಕ್ಕಿದ್ದಂತೆ ನಿಮ್ಮ ಅಂತರಂಗವು ಸತ್ಯಯುಗದಲ್ಲಿರುವುದನ್ನು ಕಾಣುತ್ತೀರಿ. ನಿಮ್ಮ ಸುತ್ತಮುತ್ತ ಸತ್ಯಯುಗದ ಅದೇ ಶಕ್ತಿಯನ್ನು, ಅದೇ ಪ್ರಜ್ಞೆಯನ್ನು, ಸ್ನೇಹಿತರನ್ನು, ವಿಚಾರಗಳನ್ನು, ಆಕರ್ಷಿಸಲಾರಂಭಿಸುತ್ತೀರಿ.
ತಿಳಿಯಿರಿ, ಮೊದಲ ತಂತ್ರವೆಂದರೆ, ನಿಮ್ಮಿಂದ ಬದಲಾಯಿಸ ಬೇಕಾಗಿರುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸುವುದು.
ಎರಡನೆಯದು, ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವ ಬುದ್ಧಿಯನ್ನು ವ್ಯಕ್ತಪಡಿಸುವುದು.
ಮೂರನೆಯದು ಒಂದು ಮುಖ್ಯವಾದ ವಿಷಯ : ಯುಕ್ತಿ.